ದರ್ಶನ್ ಶೆಟ್ಟಿ ನಾರ್ಕಳಿ/Darshan Shetty Narkali
ಕರಾವಳಿಯ ಮಣ್ಣಿನಿಂದ ಬಂದು, ಅಪ್ರತಿಮ ಶ್ರಮ, ಕಠಿಣ ಪರಿಶ್ರಮ ಮತ್ತು ದಾರ್ಶನಿಕ ದೃಷ್ಟಿಕೋನದಿಂದ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದವರು ಶ್ರೇಷ್ಠ ಉದ್ಯಮಿ, ದಾನಚಿಂತಕ ‘ಬಂಜಾರ’ ಪ್ರಕಾಶ್ ಶೆಟ್ಟಿ. ತಮ್ಮ ಅನನ್ಯ ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಹೃದಯಗಳಲ್ಲಿ ನೆಲೆಸಿರುವ ಪ್ರಕಾಶ್ ಶೆಟ್ಟಿ ಅವರಿಗೆ ಬಂಟ್ಸ್ ವರ್ಡ್ ಕಡೆಯಿಂದ ಜನ್ಮದಿನದ ಆತ್ಮೀಯ ಅಭಿನಂದನೆಗಳು.
ಕಷ್ಟದ ದಿನಗಳಿಂದ ಉದ್ಯಮ ಸಾಮ್ರಾಜ್ಯದತ್ತ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ‘ಇನ್ನಂಜೆ’ ಅನ್ನೋ ಸಣ್ಣ ಗ್ರಾಮದಲ್ಲಿ ಜನಿಸಿದ ಪ್ರಕಾಶ್ ಶೆಟ್ಟಿಯವರ ಬಾಲ್ಯದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಜೀವನದ ಕಷ್ಟ-ನಷ್ಟಗಳನ್ನು ಹತ್ತಿರದಿಂದ ಕಂಡ ಅವರು, ಸ್ವಪ್ರಯತ್ನದಿಂದ ಯಶಸ್ಸಿನ ಶಿಖರವೇರಬಲ್ಲೆ ಎಂಬುದನ್ನು ಸಾಬೀತುಪಡಿಸಿದರು.
ಬೆಂಗಳೂರಿಗೆ ಕಾಲಿಟ್ಟಾಗ ಅವರಲ್ಲಿದ್ದುದು ಬೆಟ್ಟದಷ್ಟು ಕನಸುಗಳು ಹಾಗೂ ಕಠಿಣ ಶ್ರಮದ ಮೇಲಿದ್ದ ಅಚಲ ನಂಬಿಕೆ. ‘ಬಂಜಾರ’ ಗ್ರೂಪ್ ಆಫ್ ಹೋಟೆಲ್ಸ್ ಸ್ಥಾಪಿಸಿ ಅತ್ಯಂತ ಶೀಘ್ರವಾಗಿಯೇ ಜನಪ್ರಿಯತೆಯನ್ನು ಪಡೆದುಕೊಂಡ್ರು. ಗ್ರಾಹಕರ ತೃಪ್ತಿ, ಅತ್ಯುತ್ತಮ ಗುಣಮಟ್ಟ ಮತ್ತು ವಿಶಿಷ್ಟ ಆತಿಥ್ಯಕ್ಕೆ ನೀಡಿದ ಮುಂಚೂಣಿ ಆದ್ಯತೆ ಅವರ ಬ್ರ್ಯಾಂಡ್ ಮೌಲ್ಯವನ್ನ ಹೆಚ್ಚಿಸಿತು.
‘ಗೋಲ್ಡ್ ಫಿಂಚ್’ (Goldfinch) ಹೋಟೆಲ್ಗಳು ಬಂಜಾರ ಗ್ರೂಪ್ನ ಕಿರೀಟಕ್ಕೆ ಮತ್ತೊಂದು ವಜ್ರದ ಗರಿ ಮೂಡಿಸಿದವು. ಅಂದು ಪ್ರಕಾಶಣ್ಣ ಸ್ಥಾಪಿಸಿದ ಗೋಲ್ಡ್ ಫಿಂಚ್ ಹೋಟೇಲ್ ಇಂದು ಇವರ ಆತಿಥ್ಯ ಉದ್ಯಮವು (Hospitality Sector) ಭಾರತದಲ್ಲಿಯೇ ಪ್ರಸಿದ್ದಿಯನ್ನು ಪಡೆದಿದೆ.
ಉದ್ಯಮ ಕ್ಷೇತ್ರದ ಹೆಜ್ಜೆಯ ಗುರುತು:
ಆತಿಥ್ಯ ರಂಗದಲ್ಲಿ ಯಶಸ್ಸು ಕಂಡ ಬಳಿಕ, ಪ್ರಕಾಶ್ ಶೆಟ್ಟಿಯವರು ತಮ್ಮ ಉದ್ಯಮ ಸಾಮ್ರಾಜ್ಯವನ್ನು ಇತರ ಕ್ಷೇತ್ರಗಳಿಗೂ ವಿಸ್ತರಿಸಿದರು:
ರಿಯಲ್ ಎಸ್ಟೇಟ್ ಮತ್ತು ಕನ್ಸ್ಟ್ರಕ್ಷನ್:
ಹೋಟೆಲ್ ಉದ್ಯಮ ಮಾತ್ರವಲ್ಲದೇ ವಾಣಿಜ್ಯ ಮತ್ತು ವಸತಿ ಸಮುಚ್ಛಯಗಳ ನಿರ್ಮಾಣದಲ್ಲಿ ಹೊಸ ತಂತ್ರಜ್ಞಾನ ಮತ್ತು ಗುಣಮಟ್ಟಕ್ಕೆ ಒತ್ತು ನೀಡಿ ‘ಎಂಆರ್ಜಿ ಗ್ರೂಪ್’ (MRG Group) ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಪ್ರಕಾಶಣ್ಣನ ಕೊಡುಗೆ:
ಉದ್ಯೋಗ ಸೃಷ್ಟಿ ಮಾಡುವಲ್ಲಿ ಮತ್ತು ಭಾರತೀಯ ಆರ್ಥಿಕತೆಗೆ ಕೊಡುಗೆ ನೀಡುವಲ್ಲಿ ಇವರ ಕಂಪನಿಗಳ ಪಾತ್ರ ಹಿರಿದು. ನಾಯಕತ್ವ ಮತ್ತು ದೃಷ್ಟಿಕೋನ: ಸಹಸ್ರಾರು ಉದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿ, ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ.
ಕೊಡುಗೈ ದಾನಿ: ಸಮಾಜಮುಖಿ ಸೇವೆ:
ಪ್ರಕಾಶ್ ಶೆಟ್ಟಿ ಅವರನ್ನು ಕೇವಲ ಒಬ್ಬ ಯಶಸ್ವಿ ಉದ್ಯಮಿ ಎಂದಷ್ಟೇ ಬಣ್ಣಿಸಿದರೆ ಅದು ಅಪೂರ್ಣ. ಉದ್ಯಮದಲ್ಲಿಗಳಿಸಿದ ಸಂಪಾದನೆಯ ಗಮನಾರ್ಹ ಭಾಗವನ್ನು ಅವರು ಸಮಾಜದ ಏಳಿಗೆಗಾಗಿ ವಿನಿಯೋಗಿಸುತ್ತಿರುವ ‘ಕೊಡುಗೈ ದಾನಿ’.
ಶಿಕ್ಷಣಕ್ಕೆ ಆಸರೆ: ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ, ಶಾಲಾ ಕಟ್ಟಡಗಳ ಜೀರ್ಣೋದ್ಧಾರ ಮತ್ತು ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಲೇ ಇದ್ದಾರೆ.
ಆರೋಗ್ಯ ಸೇವೆ: ಬಡ ರೋಗಿಗಳ ವೈದ್ಯಕೀಯ ವೆಚ್ಚಕ್ಕೆ ಧನಸಹಾಯ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ.
ಕಲಾ ಮತ್ತು ಸಾಂಸ್ಕೃತಿಕ ಪ್ರೋತ್ಸಾಹ: ಕರಾವಳಿಯ ಜಾನಪದ ಕಲೆಗಳಾದ ಯಕ್ಷಗಾನ, ಕಂಬಳ ಹಾಗೂ ನಾಟಕಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ನೂರಾರು ಕಲಾವಿದರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರ: ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅಪಾರ ಕೊಡುಗೆ ನೀಡಿದ್ದು, ಬಡ ಕುಟುಂಬಗಳ ಮದುವೆ ಹಾಗೂ ಸಮಾಜದ ನಿಕೃಷ್ಟ ವರ್ಗಗಳ ಏಳಿಗೆಗೆ ನಿರಂತರವಾಗಿ ನೆರವಾಗುತ್ತಿದ್ದಾರೆ.
ಸ್ಪೂರ್ತಿಯ ಚಿಲುಮೆ ಪ್ರಕಾಶ್ ಶೆಟ್ಟಿ:
“ನಾವು ಸಮಾಜದಿಂದ ಪಡೆಯುವುದಷ್ಟೇ ಅಲ್ಲ, ಸಮಾಜಕ್ಕೆ ಮರಳಿ ನೀಡುವುದು ನಮ್ಮ ಕರ್ತವ್ಯ” ಎಂಬ ತತ್ವವನ್ನು ನಂಬಿ ಬಾಳುತ್ತಿರುವ ಪ್ರಕಾಶ್ ಶೆಟ್ಟಿ ಅವರ ಜೀವನ ಪಯಣವು ಇಂದಿನ ಯುವ ಪಳಿಗೆಗೆ ದೊಡ್ಡ ಪ್ರೇರಣೆ. ಶೂನ್ಯದಿಂದ ಬೆಳೆದು ನಿಂತು, ಕೋಟ್ಯಂತರ ರೂಪಾಯಿ ಉದ್ಯಮ ಕಟ್ಟಿದರೂ ತಮ್ಮ ಮೂಲ ಹಾಗೂ ಮಣ್ಣಿನ ನಂಟನ್ನು ಮರೆಯದ ಸರಳತೆ ಅವರದ್ದು.
ಅವರ ಈ ಜನ್ಮದಿನದ ಸಂದರ್ಭದಲ್ಲಿ, ಅವರಿಗೆ ಆಯುರಾರೋಗ್ಯ, ಸುಖ-ಶಾಂತಿ ಮತ್ತು ಇನ್ನಷ್ಟು ಎತ್ತರಕ್ಕೆ ಬೆಳೆಯುವ ಶಕ್ತಿಯನ್ನು ಭಗವಂತ ಕರುಣಿಸಲಿ. ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಅವರ ಕೊಡುಗೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸೋಣ.


